ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಡಿಯೋ ಕಾನ್ಫರೆನ್ಸ್ ಮೂಲಕ ಸುರತ್ಕಲ್ ಎನ್‌ಐಟಿಕೆ ಹಾಸ್ಟೆಲ್ ಉದ್ಘಾಟಿಸಿದ ಪ್ರಧಾನಿ

ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ NITK ಸುರತ್ಕಲ್ -ಬ್ರಹ್ಮಗಿರಿ (ಬಾಲಕರ ಹಾಸ್ಟೆಲ್) ಶಿವಾಲಿಕ್ (ಬಾಲಕರ ಹಾಸ್ಟೆಲ್) ಮತ್ತು ಗೋದಾವರಿ (ಬಾಲಕಿಯರ ಹಾಸ್ಟೆಲ್) ನ ಮೂರು ಮೆಗಾ ಹಾಸ್ಟೆಲ್‌ಗಳನ್ನು ದೇಶಕ್ಕೆ ಸಮರ್ಪಿಸಿರುವುದಾಗಿ ತಿಳಿಸಿದ್ದಾರೆ.
01:15 PM Feb 21, 2024 IST | Ashitha S

ಸುರತ್ಕಲ್‌: ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ NITK ಸುರತ್ಕಲ್ -ಬ್ರಹ್ಮಗಿರಿ (ಬಾಲಕರ ಹಾಸ್ಟೆಲ್) ಶಿವಾಲಿಕ್ (ಬಾಲಕರ ಹಾಸ್ಟೆಲ್) ಮತ್ತು ಗೋದಾವರಿ (ಬಾಲಕಿಯರ ಹಾಸ್ಟೆಲ್) ನ ಮೂರು ಮೆಗಾ ಹಾಸ್ಟೆಲ್‌ಗಳನ್ನು ದೇಶಕ್ಕೆ ಸಮರ್ಪಿಸಿರುವುದಾಗಿ ತಿಳಿಸಿದ್ದಾರೆ.

Advertisement

ಈ ಯೋಜನೆಯನ್ನು 130 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಾರ್ಯಕ್ರಮವು ಶಿಕ್ಷಣ ಮತ್ತು ಕೌಶಲ್ಯ ವಲಯದಲ್ಲಿ 13,300 ಕೋಟಿ ರೂಪಾಯಿಗಳ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಹೊಂದಿದ್ದು ಇದನ್ನು ಪ್ರಧಾನ ಮಂತ್ರಿಗಳು ರಾಷ್ಟ್ರಕ್ಕೆ ಸಮರ್ಪಿಸಿರುವುದು ಕಾರ್ಯಕ್ರಮದ ಮುಖ್ಯ ಭಾಗವಾಗಿತ್ತು. ಸಮರ್ಪಣೆ ಸಮಾರಂಭವು ಬೆಳಿಗ್ಗೆ 11.00 ಗಂಟೆಗೆ NITK ಕ್ಯಾಂಪಸ್‌ನಲ್ಲಿ ನಡೆಯಿತು. ಈ ವರ್ಚುವಲ್ ಕಾರ್ಯಕ್ರಮದಲ್ಲಿ ಶ್ರೀ ಧರ್ಮೇಂದ್ರ ಪ್ರಧಾನ್ ಗೌರವಾನ್ವಿತ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರು, ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕ ರಾಜ್ಯಪಾಲರು ಹಾಗು ಸಿಎಂ ಶ್ರೀ ಸಿದ್ದರಾಮಯ್ಯನವರು ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮ ಕುರಿತು ಶ್ರೀ ನಳಿನ್ ಕುಮಾರ್ ಕಟೀಲ್ ಮಾತಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಚಟುವಟಿಕೆಗಳನ್ನು ಉಲ್ಲೇಖಿಸಿದ ಅವರು ದಕ್ಷಿಣ ಕನ್ನಡದಲ್ಲಿ ವಿಶೇಷವಾಗಿ NITK ಸುರತ್ಕಲ್‌ನಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಡೀನ್‌ಗಳು, ಆಡಳಿತ ಮುಖ್ಯಸ್ಥರು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ 300 ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇನ್ನು,1960 ರಲ್ಲಿ ಸ್ಥಾಪಿತವಾದ NITK ಸುರತ್ಕಲ್ ಭಾರತದ ಪ್ರಮುಖ 12 ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಜೈವಿಕ-3D
ಮುದ್ರಣ, ಮಾಹಿತಿ ಭದ್ರತೆ, ವಿದ್ಯುತ್ ಸಾರಿಗೆ ಮತ್ತು ಸುಸ್ಥಿರತೆಯಂತಹ ಅತ್ಯಾಧುನಿಕ ಪ್ರದೇಶಗಳಲ್ಲಿ 11 UG, 31 PG ಮತ್ತು ಡಾಕ್ಟರೇಟ್ ಸಂಶೋಧನಾ ಕಾರ್ಯಕ್ರಮಗಳನ್ನು ನೀಡುವ 14 ಶೈಕ್ಷಣಿಕ ವಿಭಾಗಗಳನ್ನು ಹೊಂದಿದೆ.

294 ಎಕರೆಗಳ ಕ್ಯಾಂಪಸ್ ಕರಾವಳಿಯುದ್ದಕ್ಕೂ ಪ್ರಶಾಂತ ಪರಿಸರದಲ್ಲಿದೆ. ಸಂಸ್ಥೆಯು ಸುಮಾರು 7000 ವಿದ್ಯಾರ್ಥಿಗಳನ್ನು ಹೊಂದಿದೆ, ಅವರಲ್ಲಿ ಹೆಚ್ಚಿನವರು
ಕ್ಯಾಂಪಸ್‌ನಲ್ಲಿ ವಾಸಿಸುತ್ತಿದ್ದಾರೆ. 275 ಕ್ಕೂ ಹೆಚ್ಚು ಅಧ್ಯಾಪಕ ಸದಸ್ಯರು, 400 ಸಿಬ್ಬಂದಿ ಬೆಂಬಲದೊಂದಿಗೆ ಬೋಧನೆ-ಕಲಿಕೆ, ಸಂಶೋಧನೆ, ಅಭಿವೃದ್ಧಿ, ಸಲಹಾ ಮತ್ತು ಪ್ರಭಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸ್ಥೆಯು 30,000 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳನ್ನು ಉತ್ಪಾದಿಸಿದೆ ಮತ್ತು ಸಮಾಜ ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಿದೆ.

Advertisement
Tags :
GOVERNMENTindiaKARNATAKALatestNewsNewsKannadaನವದೆಹಲಿಬೆಂಗಳೂರುಮಂಗಳೂರುಹಾಸ್ಟೆಲ್
Advertisement
Next Article