ರಾಜ್ಯಪಾಲರು ಧ್ವಜಾರೋಹಣದ ವೇಳೆ ಭದ್ರತಾ ಲೋಪ !
75ನೇ ಗಣರಾಜೋತ್ಸವ ಸಂಭ್ರಮಾಚರಣೆ ವೇಳೆ ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಿಎಂ ಸಿದ್ದರಾಮಯ್ಯರವರ ಮುಂದೆ ಕರಪತ್ರ ಹಿಡಿದು ಒಳನುಗ್ಗಿದ ಪ್ರಸಂಗ ನಡೆದಿದೆ.
11:53 AM Jan 26, 2024 IST
|
Ashitha S
ಬೆಂಗಳೂರು: 75ನೇ ಗಣರಾಜೋತ್ಸವ ಸಂಭ್ರಮಾಚರಣೆ ವೇಳೆ ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಸಿಎಂ ಮುಂದೆ ಕರಪತ್ರ ಹಿಡಿದು ಒಳನುಗ್ಗಿದ ಪ್ರಸಂಗ ನಡೆದಿದೆ.
Advertisement
ವ್ಯಕ್ತಿ ಸ್ಟೇಜ್ ಮುಂದೆಯಿಂದ ಗ್ರೌಂಡ್ ಒಳಗೆ ಓಡಿ ಬಂದಿದ್ದಾನೆ. ಗ್ರೌಂಡ್ ಒಳಗೆ ಓಡಿ ಬಂದ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ಬಳಿ ನಿಂತು ಪೋಸ್ಟರ್ ಪ್ರದರ್ಶನ ಮಾಡಿದ್ದಾನೆ. ಇದನ್ನು ಕಂಡ ಪೊಲೀಸರು ಆತನನ್ನು ಕೂಡಲೆ ಬಂಧಿಸಿದ್ದಾರೆ.
ವ್ಯಕ್ತಿ ಕಣ್ಣೀರಿಡ್ತಾ ಪೋಸ್ಟರ್ ತೋರಿಸಿದ್ದಾನೆ. ಅರೆಸ್ಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಕಬ್ಬನ್ ಪಾರ್ಕ್ ಸ್ಟೇಷನ್ ಗೆ ಕರೆದೊಯ್ದಿದ್ದಾರೆ.
Advertisement
Advertisement
Next Article