ತನ್ನನ್ನು ಹಿಮದಿಂದ ರಕ್ಷಿಸಿಕೊಳ್ಳಲು ಹಿಮ ಕರಡಿಯ ಪ್ಲಾನ್ ನೋಡಿ
ವೈರಲ್: ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಉದ್ಯಮಿ ಆನಂದ್ ಮಹೀಂದ್ರ ಕುತೂಹಲಕಾರಿ ವಿಷಯನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇದೀಗ ಅಂತಹದ್ದೇ ಹಿಮ ಕರಡಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಪ್ರಾಣಿ,ಪಕ್ಷಿಗಳು ಮನುಷ್ಯರಷ್ಟು ಚಾಣಕ್ಯರಲ್ಲದ್ದಿದ್ದರು ನಿಯತ್ತಿನ ಜೀವಿಗಳು, ದಿನೇ ದಿನೇ ಸೋಶಿಯಲ್ ಮೀಡಿಯಾಗಳಲ್ಲಿ ಸಾಕು ಪ್ರಾಣಿಗಳ ಜಾಣ್ಮೆ ಹಾಗೂ ತುಂಟಾಟದ ವೀಡಿಯೊಗಳು ವೈರಲ್ ಆಗುವುದನ್ನು ನೀವು ನೋಡುತ್ತಲೆ ಇರುತ್ತೀರಾ ಆದೇ ರೀತಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕುತೂಹಲ ವಿಡಿಯೋ ಶೇರ್ ಮಾಡುವ ಉದ್ಯಮಿ ಆನಂದ್ ಮಹೀಂದ್ರ ಕರಡಿ ತನ್ನ ಜಾಣ್ಮೆ ಮೆರೆದಿರುವ ವೀಡಿಯೊ ಹಂಚಿಕೊಂಡಿದ್ದು ಹಿಮ ಕರಡಿಯ ಈ ಬುದ್ಧಿವಂತಿಕೆಯನ್ನು ಷೇರು ಮಾರುಕಟ್ಟೆ ಹೂಡಿಕೆ ಸಂದರ್ಭದಲ್ಲಿ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.
ಹಾಗಾದ್ರೆ ಕರಡಿಯ ಪ್ಲಾನ್ ಏನು ಅಂತಿರಾ ಇಲ್ಲಿದೆ ಮಾಹಿತಿ, ಹಿಮಕರಡಿಯೊಂದು ತೆಳು ಮಂಜುಗಡ್ಡೆ ಮೇಲೆ ನಡೆದು ಹೋದರೆ ಅಪಾಯವಿದೆ ಎಂದು ತಿಳಿದ ಕರಡಿ ಬುದ್ಧಿವಂತಿಕೆಯಿಂದ ತೆವಳಿ ದಡ ಸೇರಿದೆ. ಇದೀಗ ಸೋಶಿಯಲ್ ಮಿಡಿಯಾದಲ್ಲಿ ಬಾರಿ ವೈರಲ್ ಆಗಿದೆ.