ದೇವೇಗೌಡರು ಉಡುಪಿಗೆ ಬಂದಾಗ ಕೇಸರಿ ಶಾಲು ಹಾಕಿ ಸ್ವಾಗತಿಸುತ್ತೇನೆ: ಯಶ್ಪಾಲ್ ಸುವರ್ಣ
ದೇವೇಗೌಡರು ಉಡುಪಿಗೆ ಬಂದಾಗ ನಾನು ಶಾಸಕನಾಗಿ ಕೇಸರಿ ಶಾಲು ಹಾಕಿ ಸ್ವಾಗತ ಮಾಡುತ್ತೇನೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
03:43 PM Feb 03, 2024 IST
|
Gayathri SG
ಉಡುಪಿ: ದೇವೇಗೌಡರು ಉಡುಪಿಗೆ ಬಂದಾಗ ನಾನು ಶಾಸಕನಾಗಿ ಕೇಸರಿ ಶಾಲು ಹಾಕಿ ಸ್ವಾಗತ ಮಾಡುತ್ತೇನೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
Advertisement
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಎನ್ಡಿಎ ಒಪ್ಪಿಕೊಂಡು ಮೈತ್ರಿಕೂಟದ ಜೊತೆಗಿದ್ದಾರೆ. ಕೇಸರಿ ಶಾಲು ಧರಿಸಲ್ಲ ಎಂಬುದು ಅವರ ವೈಯಕ್ತಿಕ ಹೇಳಿಕೆಯೋ ಅಥವಾ ಪಕ್ಷದ ನಿಲುವೋ ಗೊತ್ತಿಲ್ಲ. ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಪ್ಪಿಕೊಂಡಿದ್ದಾರೆ. ಮೋದಿ ಕಾರ್ಯಕ್ರಮದ ಗುಣಗಾನವನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 28ಕ್ಕೆ 28 ಗೆಲ್ಲುವ ಪ್ರಯತ್ನವನ್ನು ಎನ್ಡಿಎ ಮಾಡುತ್ತಿದೆ. ದೇವೇಗೌಡರ ಈ ಹೇಳಿಕೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ದೇವೇಗೌಡರು ಉಡುಪಿಗೆ ಬಂದಾಗ ನಾನು ಶಾಸಕನಾಗಿ ಕೇಸರಿ ಶಾಲು ಹಾಕಿ ಸ್ವಾಗತ ಮಾಡುತ್ತೇನೆ ಎಂದರು.
Advertisement
Advertisement
Next Article