ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೀದಿಗೆ ಬಂತು ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ಲವ್ ಸ್ಟೋರಿ

ಕರ್ನಾಟಕ ರಣಜಿ ತಂಡದ ಯುವ ಕ್ರಿಕೆಟಿಗ ಹಾಗೂ ಐಪಿಎಲ್‌ ಆಟಗಾರ ಕೆ.ಸಿ ಕಾರಿಯಪ್ಪ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದೆ. ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಯುವ ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
05:18 PM Dec 25, 2023 IST | Ashitha S

ಬೆಂಗಳೂರು: ಕರ್ನಾಟಕ ರಣಜಿ ತಂಡದ ಯುವ ಕ್ರಿಕೆಟಿಗ ಹಾಗೂ ಐಪಿಎಲ್‌ ಆಟಗಾರ ಕೆ.ಸಿ ಕಾರಿಯಪ್ಪ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದೆ. ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಯುವ ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

Advertisement

"ನಾನು ಮತ್ತು ಕೆ.ಸಿ ಕಾರಿಯಪ್ಪ ಇನ್‍ಸ್ಟಾದಲ್ಲಿ ಪರಿಚಯವಾಗಿದ್ದು, ಒಂದೇ ಕಮ್ಯೂನಿಟಿ ಹಾಗೂ ಒಂದೇ ಊರಿನವರಾಗಿದ್ದೇವೆ. ಆರಂಭದಲ್ಲಿ ನನಗೆ ಲವರ್ ಇರುವ ಬಗ್ಗೆ ಹೇಳಿದ್ದೆ. ಹೀಗಾಗಿ ಫ್ರೆಂಡ್ ಆಗಿ ಇರುವ ಬಗ್ಗೆ ಮಾತನಾಡಿದೆವು. ಅದಾದ ಬಳಿಕ ನಮ್ಮ ಮನೆಯವರಿಗೆ ಪರಿಚಯ ಮಾಡಲಾಗಿತ್ತು. ನನಗೆ ಮೊದಲ ಲವ್ವರ್ ಗಿಂತ ನಿವೇ ಇಷ್ಟ ಅಂತ ನಂಬಿಸಿ ನನ್ನನ್ನು ದೈಹಿಕವಾಗಿ ಬಳಸಿಕೊಂಡರು. ಹೀಗಾಗಿ ನಾನು ಪ್ರಗ್ನೆಂಟ್ ಆಗಿದ್ದೆ. ಅದನ್ನ ಅಬಾರ್ಷನ್ ಮಾಡಿಸಿಕೊಳ್ಳುವಂತೆ ಹೇಳಿದ್ದ. ಆದರೆ ಅದಕ್ಕೆ ನಾನು ಒಪ್ಪಿಕೊಳ್ಳಲಿಲ್ಲ. ಆದರೂ ಐಪಿಎಲ್ಇ ದೆ, ನಂತರ ಮದುವೆ ಆಗೋಣ ಅಂತ ಹೇಳಿ ಅಬಾರ್ಷನ್ ಮಾಡಿಸಿದ ಎಂದು ಆರೋಪಿಸಿದ್ದಾರೆ.

ಒಮ್ಮೆ ಹಳೆ ಲವರ್ ಕಾಲ್ ಮಾಡಿದ್ದರು. ಆಗ ನನಗೆ ಮೋಸ ಮಾಡಿರೋ ಬಗ್ಗೆ ಹೇಳಿದರು. ಅದ್ದರಿಂದ ನನಗೆ ವಿಚಾರ ಗೊತ್ತಾಯ್ತು. ನನ್ನ ಮೇಲೆ ಡ್ರಗ್ಸ್ ತೆಗೆದುಕೊಳ್ಳುವ ಆರೋಪ ಕೂಡ ಮಾಡಿದ್ದರು ಎಂದಿದ್ದಾರೆ. ಸದ್ಯ ಇಬ್ಬರ ಪ್ರೇಮ ಪುರಾಣ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಾಜಿ ಪ್ರಿಯತಮೆಯಿಂದ ಆರ್ ಟಿ ನಗರ ಠಾಣೆಯಲ್ಲಿ ದೂರು ದಾಖಲಾದರೆ, ಕಾರಿಯಪ್ಪ ಅವರು ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

Advertisement

Advertisement
Tags :
indiaKARNATAKALatestNewsNewsKannadaಕೆ.ಸಿ ಕಾರಿಯಪ್ಪನವದೆಹಲಿ
Advertisement
Next Article