ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಈ ಪ್ರೀತಿ ಒಂಥರಾ. . . .; ಬಾಯ್​ಫ್ರೆಂಡ್​​ಗಾಗಿ ಬಾಂಗ್ಲಾದಿಂದ ಭಾರತಕ್ಕೆ ಬಂದ ಯುವತಿ

ಭಾರತೀಯನ ಪ್ರೀತಿಗೆ ಬಿದ್ದ ಯುವತಿಯೊಬ್ಬಳು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದಾಳೆ. ರುಮಾ ಮರಿಯಮ್ ಎಂಬಾಕೆ ಒಡಿಶಾದ ಬಾಲಸೋರ್​​​​ ಜಿಲ್ಲೆಯ ನಿವಾಸಿಯಾದ ಬೀರೇಂದ್ರ ಪ್ರತಾಪ್​ ಎಂಬಾತನನ್ನು ಆರು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡರು. ಕ್ರಮೇಣ ಇವರ ಪರಿಚಯ ಗೆಳೆತನದಿಂದ ಪ್ರೀತಿಗೆ ತಿರುಗಿತು.
10:40 AM Dec 04, 2023 IST | Ashitha S

ದೆಹಲಿ: ಭಾರತೀಯನ ಪ್ರೀತಿಗೆ ಬಿದ್ದ ಯುವತಿಯೊಬ್ಬಳು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದಾಳೆ. ರುಮಾ ಮರಿಯಮ್ ಎಂಬಾಕೆ ಒಡಿಶಾದ ಬಾಲಸೋರ್​​​​ ಜಿಲ್ಲೆಯ ನಿವಾಸಿಯಾದ ಬೀರೇಂದ್ರ ಪ್ರತಾಪ್​ ಎಂಬಾತನನ್ನು ಆರು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡರು. ಕ್ರಮೇಣ ಇವರ ಪರಿಚಯ ಗೆಳೆತನದಿಂದ ಪ್ರೀತಿಗೆ ತಿರುಗಿತು.

Advertisement

ಬೀರೇಂದ್ರ ಪ್ರತಾಪ್ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದ. ಆಕೆಯನ್ನು ಕಾಣಲು ಬಾಂಗ್ಲಾದೇಶಕ್ಕೂ ಹೋಗಿದ್ದಾನೆ. ಆಕೆಯನ್ನು ಭೇಟಿಯಾಗಿದ್ದಲ್ಲದೆ ದೈಹಿಕ ಸಂಬಂಧ ಕೂಡ ನಡೆಸಿದ್ದಾನೆ ಎಂದು ರುಮಾ ಹೇಳಿದ್ದಾಳೆ.

ಕೊನೆಗೆ ರುಮಾ ತನ್ನ ಪ್ರಿಯಕರ ಬಳಿ ಮದುವೆಯಾಗಲು ಕೇಳುತ್ತಾಳೆ. ಇಸ್ಲಾಂಮಿಕ್​​ ವಿಧಿಗಳ ಪ್ರಕಾರ ವಿವಾಹವಾಗೋಣ ಎಂದು ಒತ್ತಾಯಿಸಿದಾಗ ಆತ ನಿರಾಕರಿಸಿದ್ದಾನೆ. ಬಳಿಕ ಆತ ಬಾಂಗ್ಲಾದಿಂದ ಒಡಿಶಾಗೆ ಹಿಂತಿರುಗಿದ್ದಾನೆ.

Advertisement

ಆದರೆ ಆತನ ನೆನಪಲ್ಲೇ ಉಳಿದುಕೊಂಡಿದ್ದ ರುಮಾ ಇದೀಗ ಪ್ರಿಯಕರನ ಬಳಿಗೆ ಓಡೋಡಿ ಬಂದಿದ್ದಾಳೆ. ಬಾಲಸೋರ್​ ತಲುಪಿದ್ದಾಳೆ. ಮಾತ್ರವಲ್ಲದೆ, ಬೀರೇಂದ್ರ ಪ್ರತಾಪ್ ಮನೆಗೆ ಹೋಗಿದ್ದಾಳೆ. ಆದರೆ ಪ್ರಿಯಕರನ ಮನೆಯವರು ಆಕೆಯನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾರೆ. ಅಲ್ಲದೆ ಆತನಿಗೆ ಈಗಾಗಲೇ ಮದುವೆಯಾಘಿರುವುದಾಗಿ ತಿಳಿಸಿದ್ದಾರೆ. ಆದರೆ ಯುವತಿ ಮಾತ್ರ ಆತನನ್ನು ಮದುವೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಮಾತ್ರವಲ್ಲದೆ, ತನಗೆ ನ್ಯಾಯ ಬೇಕೆಂದು ಪೊಲೀಸ್​ ವರಿಷ್ಠಾಧಿಕಾರಿಯನ್ನ ಭೇಟಿ ಮಾಡಿ ದೂರು ದಾಖಲಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾಳೆ.

Advertisement
Tags :
indiaLatestNewsNewsKannadaನವದೆಹಲಿಬಾಂಗ್ಲಾದೇಶಬಾಯ್​ಫ್ರೆಂಡ್ಭಾರತಯುವತಿಲವ್ ಸ್ಟೋರಿ
Advertisement
Next Article